ಕನ್ನಡಿಗಳು ಬೇಕು

ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ
ಕನ್ನಡಿಗಳು ಬೇಕು!
ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು

ಎತ್ತರಗಳ ಅಳೆಯಲು
ಬದಲಾದ ಕನಸುಗಳ ಗುರುತಿಸಲು
ಕೈಗೆಟುಕುವುದೇ ಮುಗಿಲು? ತಿಳಿಯಲು
ದಾರಿಗೆ ಹಿಡಿದಿದೆಯೇ ಗೆದ್ದಲು?
ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ಮಗ್ಗುಲು?
ಸೋಲುಗಳ ಮೆಟ್ಟಿ ಗೆಲುವಿನ ಮೆಟ್ಟಿಲಾಗಿಸಲು
ಕನ್ನಡಿಗಳು ಬೇಕು!
ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು

ಒಡೆದ ಕನಸುಗಳ ಮತ್ತೆ ಜೋಡಿಸಲು
ಮಿತಿಯೊಳಗಿರುವುದು ಬದುಕೋ
ಮಿತಿಮೀರಿದ್ದು ಬದುಕೋ ಅರ್ಥೈಸಲು
ಅರ್ಥವಾಗದೇ ಉಳಿದ
ಒಗಟುಗಳ ಬಿಡಿಸಲು
ಎತ್ತರೆತ್ತರ ಕಟ್ಟಿಕೊಂಡ ಅಹಮ್ಮಿನ
ಕೋಟೆಗಳ ಒಡೆಯಲು
ಕನ್ನಡಿಗಳು ಬೇಕು!
ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು

ತನಗೆ ತಾನೇ ಹೆಣೆದುಕೊಂಡ
ಭ್ರಮೆಯ ಗೂಡುಗಳ
ಒಡೆದು ಹೊರಬರಲು
ಇದ್ದಕ್ಕಿದ್ದಂತೆ ಧುತ್ತನೆ ಏಳುವ
ವ್ರಣಗಳ ಆಳ ಅಳೆಯಲು
ಕಾಣುವ ನೂರು ಮುಖಗಳ
ಕಾಣದ ಅಸಂಖ್ಯ ಭಾವಗಳ ಅರ್ಥೈಸಲು
ಆತ್ಮೀಯ ಕನ್ನಡಿಗಳು ಬೇಕು!
ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓಯಸಿಸ್ಸು
Next post ಇವ ಅವನಲ್ಲ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys